ವಿಜಯಪುರ: ಕೌಶಲ್ಯ ಮಿಷನ್ ಬೆಂಗಳೂರು, ಕೆ.ಎಸ್.ಡಿ.ಸಿ. ಹಾಗೂ ಹೋಟೆಲ್ ಅಸೋಸಿಯೇಶನ್ ಸಹಯೋಗದೊಂದಿಗೆ ಜೂನ.15ರಂದು ಬೆಳಿಗ್ಗೆ 9-30ಕ್ಕೆ ಬೆಂಗಳೂರಿನ ಡೈರಿ ಸರ್ಕಲ್, ಕೌಶಲ್ಯ ಭವನ ಕೆ.ಎಸ್.ಡಿ.ಸಿ. ಕಚೇರಿಯಲ್ಲಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ.
ಉದ್ಯೋಗ ಮೇಳದಲ್ವಲಿ ಸ್ಟೀವರ್ಡ್, ಕ್ಯಾಪ್ಟನ್, ಅಡುಗೆ ಸಹಾಯಕ, ಮಾಣಿ, ಮೇಲ್ವಿಚಾರಕ, ಬಾಣಸಿಗ ಇತ್ಯಾದಿ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ವಸತಿ ಊಟ, ಇಎಸ್ಐ-ಪಿಎಫ್ ಸೌಲಭ್ಯವಿದ್ದು, 10, 12ನೇ ತರಗತಿ ಡಿಪ್ಲೋಮಾ ಅಥವಾ ಐಟಿಐ ಉತ್ತೀರ್ಣ-ಅನುತ್ತೀರ್ಣರಾದ ಆಸಕ್ತ ಜಿಲ್ಲೆಯ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ.15ಕ್ಕೆ ಬೆಂಗಳೂರಿನಲ್ಲಿ ಉದ್ಯೋಗ ಮೇಳ
![ಜೂ.15ಕ್ಕೆ ಬೆಂಗಳೂರಿನಲ್ಲಿ ಉದ್ಯೋಗ ಮೇಳ ಜೂ.15ಕ್ಕೆ ಬೆಂಗಳೂರಿನಲ್ಲಿ ಉದ್ಯೋಗ ಮೇಳ](https://karnataka1news.com/wp-content/uploads/2023/06/education.jpg)