ವಿಜಯಪುರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಿಜಯಪುರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ವೆಂಕಣ್ಣ ಬಿ. ಹೊಸಮನಿ ದಿಢೀರ್ನೆ ವಿಜಯಪುರದ ಆದರ್ಶನಗರ ಪೊಲೀಸ ಠಾಣೆಗೆ ಶುಕ್ರವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಠಾಣೆಯಲ್ಲಿ ಕರ್ತವ್ಯದಲ್ಲಿದ ಸಿಬ್ಬಂದಿಗಳಿಂದ ಠಾಣೆಯ ಸಂಪೂರ್ಣ ಮಾಹಿತಿ ಕಲೆ ಹಾಕಿದರು. ಅಲ್ಲದೇ, ಠಾಣೆಯಲ್ಲಿ ಆರೋಪಿತರ ಹಕ್ಕುಗಳ ಫಲಕ ಅಳವಡಿಸುವಂತೆ ಸೂಚನೆ ನೀಡಿದರು. ಆರೋಪಿತರ ಹಕ್ಕುಗಳ ಫಲಕ ಅಳವಡಿಸಿ, ಸೂಕ್ತ ಮಾಹಿತಿ ನೀಡಬೇಕು. ಅಲ್ಲದೇ, ಉಚಿತ ಕಾನೂನು ಸಲಹಾ ಕೇಂದ್ರದ ವಕೀಲರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡುವಂತೆ ಹೇಳಿದರು.