ವಿಜಯಪುರ: ವಿಜಯಪುರದಲ್ಲಿ ಕಾಂಗ್ರೆಸ್ ಮುಖಂಡರ ನಡುವೆ ಗಲಾಟೆಯಾಗಿರುವ ಘಟನೆ ವಿಜಯಪುರ ನಗರದ ದರ್ಬಾರ್ ಮೈದಾನದಲ್ಲಿ ಶುಕ್ರವಾರ ನಡೆದಿದೆ. ಕೃಷ್ಣಾ ಜಲಾಂದೋಲನ ಕಾರ್ಯಕ್ರಮ ಆರಂಭಕ್ಕೂ ಮುನ್ನ ಭಿನ್ನಮತ ಸ್ಫೋಟಗೊಂಡಿದೆ. ವೇದಿಕೆ ಮೇಲೆ ಕುಳಿತುಕೊಳ್ಳಲು ಕಾಂಗ್ರೆಸ್ ಮುಖಂಡರಾದ ಇರ್ಫಾನ್ ಶೇಕ್, ಎಂ ಆರ್ ತಾಂಬೋಳಿ ಮಧ್ಯೆ ವೇದಿಕೆ ಮೇಲೆ ಗಲಾಟೆ ಆಗಿದೆ. ವೇದಿಕೆ ಕೆಳಗಿನ ಕುರ್ಚಿ ಮೇಲೂ ಮಹಿಳಾ ಮುಣಿಗಳು ರಂಪಾಟ ಮಾಡಿದ್ದಾರೆ. ಇಬ್ಬರ ಮಧ್ಯೆ ವೇದಿಕೆ ಮೇಲೆ ಗಲಾಟೆ ಹಿನ್ನೆಲೆ ಇಬ್ಬರನ್ನು ಸಮಾಧಾನ ಮಾಡಲು ಕಾರ್ಯಕರ್ತರು ಹರಸಾಹಸ ಪಟ್ಟರು.