ವಿಜಯಪುರ: ಬಣ್ಣ ಎಲ್ಲಾ ಇವತ್ತೆ ಆಡಿ ಮುಗಿಸಬೇಡರಿ, ಮೇ ದಾಗ ಮತ್ತೊಮ್ಮೆ ಕೇಸರಿ ಗುಲಾಲ ಆಡೊದೈತಿ ತಯಾರ ಇರ್ರಿ ಎಂದು ಬಿಜೆಪಿ ಮುಖಂಡ ಕಾಶಿನಾಥ ಮಸಿಬಿನಾಳ ಹೇಳಿದರು. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಅದ್ಧೂರಿಯಾಗಿ ಬೃಹತ್ ರಂಗೋತ್ಸವ ಆಚರಣೆಯಲ್ಲಿ ಹೇಳಿದರು. ನಮ್ಮ ಸಂಸ್ಕೃತಿಯನ್ನು ಉಳಿಬೇಕು. ನಮ್ಮ ಹಬ್ಬಗಳು ಉಳಿಸಿ, ಪ್ರಪಂಚದಾದ್ಯಂತ ನಮ್ಮ ಸಂಸ್ಕೃತಿ ದೀಪದಂತೆ ಬೆಳಗಿಸಬೇಕಿದೆ. ಈ ದೇಶ ಉಳಿಬೇಕು ಅಂದ್ರೇ ಕೇಸರಿ ಪಡೆಯ ಕೈಯಾಗ ಇರಬೇಕು. ಕೇಸರಿ ಪಡೆ ಚುಕ್ಕಾಣಿ ಹಿಡಿಬೇಕಂದ್ರೇ ಕೇಸರಿ ಶಾಲು ಹಾಕೊಂಡೋರು ಮಾತ್ರ ಆರಿಸಿಬರಬೇಕು ಎಂದರು. ಈ ಸಂದರ್ಭದಲ್ಲಿ ಡಿಜೆ ಸೌಂಡ್ಗೆ ಯುವಕರು, ಯುವತಿಯರು ಕುಣಿದು ಕುಪ್ಪಳಿಸಿದರು.