ಮಂಗಳೂರು: ಮಂಗಳೂರು: ಜಿಲ್ಲಾ ಪೊಲೀಸ್ ಕಮಿಷನರ್ ಶಶಿಕುಮಾರ್ ವರ್ಗಾವಣೆಗೊಂಡಿದ್ದು, ನೂತನವಾಗಿ ಕುಲದೀಪ್ ಕುಮಾರ್ ಜೈನ್ ಅವರು ಕಮಿಷನರ್ ಆಗಿ ನಿಯುಕ್ತಗೊಂಡಿದ್ದಾರೆ.
ಶಶಿ ಕುಮಾರ್ ಅವರು ಸುಮಾರು 2 ವರ್ಷಗಳಿಂದ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ರೈಲ್ವೇ ಡಿಐಜಿ ಹುದ್ದೆಗೆ ವರ್ಗಾವಣೆ ಹೊಂದಿದ್ದಾರೆ. ಜೈನ್ ಅವರು ವಿಜಯಪುರ ಜಿಲ್ಲಾ ಎಸ್ಪಿ ಆಗಿ ಖಡಕ್ ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಭೀಮಾತೀರದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ತರಹ ಮಂಗಳೂರುನಲ್ಲೂ ಉತ್ತಮ ಆಡಳಿತ ನೀಡಿ, ಗಲಭೆಗಳಿಗೆ ಅಂತ್ಯ ಹಾಡಲಿ ಎನ್ನುವುದು ಸ್ಥಳೀಯ ಒತ್ತಾಯ ಆಗಿದೆ.
ಕಡಲತೀರಕ್ಕೆ ಖಡಕ್ ಕಮಿಷನರ್ ಎಂಟ್ರಿ
![](https://karnataka1news.com/wp-content/uploads/2023/02/IMG_20230223_163049-860x835.jpg)