ವಿಜಯಪುರ: ಅಪರಿಚಿತರು ಹಾಗೂ ಕಳ್ಳರ ಬಗ್ಗೆ ಮಾಹಿತಿ ನೀಡುವಂತೆ ಜಲನಗರ ಪಿಎಸ್ಐ ಜ್ಯೋತಿ ಕೋಟ ಹೇಳಿದರು. ವಿಜಯಪುರದ ಗಣೇಶ ನಗರದಲ್ಲಿ ಕಳ್ಳರು, ಅಪರಿಚಿತರು ಕಂಡು ಬಂದ್ರೇ ಮಾಹಿತಿ ನೀಡುವಂತೆ ಪಿಎಸ್ಐ ಜ್ಯೋತಿ ಕೋಟ ಸ್ಥಳೀಯರಲ್ಲಿ ಜಾಗೃತಿ ಮೂಡಿಸಿದರು. ಅಲ್ಲದೇ, ಸ್ಥಳೀಯರ ಕುಂದುಕೊರತೆಗಳನ್ನು ಆಲಿಸಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಭರವಸೆ ನೀಡಿದರು. ಅಲ್ಲದೇ, ಪೊಲೀಸ ಇಲಾಖೆ ಜನತೆಗಾಗಿ 24*7 ಕೆಲಸ ನಿರ್ವಹಣೆ ಮಾಡುತ್ತದೆ. ಅದಕ್ಕಾಗಿ ಧೈರ್ಯದಿಂದ ಪೊಲೀಸರಿಗೆ ಸಾತ್ ನೀಡುವಂತೆ ಮನವಿ ಮಾಡಿದರು.