ವಿಜಯಪುರ: 1 ಸಾವಿರ ರೂಪಾಯಿ ಹಣದ ವಿಚಾರಕ್ಕೆ ಯುವಕ ಹತ್ಯೆಗೈದಿರುವ ಹಂತಕರು ಕೊಲೆ ಮಾಡುವ ದೃಶ್ಯ ವಿಜಯಪುರದ ಗೋದಾವರಿ ಹೋಟೆಲ್ನಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನು ಮಹಮ್ಮದ್ ತಲ್ಹಾ ಅಥಣಿ ಎಂಬ ಯುವಕ ಹತ್ಯೆಯಾಗಿದ್ದಾನೆ. ಹಣದ ವಿಚಾರಕ್ಕೆ ಅಥಣಿಯನ್ನು ಹರಿತವಾದ ಮಾರಕಾಸ್ತ್ರದಿಂದ ಹಾಗೂ ಕಲ್ಲುಗಳನ್ನು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಹತ್ಯೆಗೈದು ಪರಾರಿಯಾಗಿದ್ದರು. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಈ ನಡೆದಿದ್ದು, ದೂರು ದಾಖಲಾಗಿದೆ.