ವಿಜಯಪುರ: ಆಸ್ತಿಗಾಗಿ ವೃದ್ಧೆಯನ್ನು ಸಂಬಂಧಿಕರೆ ಹತ್ಯೆಗೈದು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹೊರ್ತಿ ಗ್ರಾಮದಲ್ಲಿ ಸೋಮವಾರ ನಡೆದಿದೆ. 55 ವರ್ಷದ ಲಕ್ಷ್ಮಿಬಾಯಿ ಒಡೆಯರ ಹತ್ಯೆಯಾದವರು. ಅಲ್ಲದೇ, ಕಳೆದ ಹಲವು ದಿನಗಳಿಂದ ಆಸ್ತಿಗಾಗಿ ಸಂಬಂಧಿಕರ ಮಧ್ಯೆ ಕಲಹ ನಡೆದಿತ್ತು. ಇದೀಗ್ ಕೊಲೆಯಲ್ಲಿ ಅಂತ್ಯಗೊಂಡಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಹೊರ್ತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.