ವಿಜಯಪುರ: ಚಿನ್ನವನ್ನು ಪಾಲಿಸ್ ಮಾಡುತ್ತೇವೆ ಎಂದು ಇಬ್ಬರು ಮಹಿಳೆಯರಿಗೆ ಅಪರಿಚಿತರು ಪಂಗನಾಮ ಹಾಕಿರುವ ಘಟನೆ ವಿಜಯಪುರ ನಗರದ ಶಾಂತಿನಗರದಲ್ಲಿ ನಡೆದಿದೆ. ಶಾಂತಿನಗರ ನಿವಾಸಿಗಳಾದ ರಶ್ಮಿ ಶೇಟ್ ಹಾಗೂ ನಂದಿನಿ ಎಂಬುವರ 1.60 ಲಕ್ಷ ಮೌಲ್ಯದ 80 ಗ್ರಾಂ ಚಿನ್ನ ದೋಚಿಕೊಂಡು ಪರಾರಿಯಾಗಿದ್ದಾರೆ. ಚಿನ್ನವನ್ನು ಪಾಲಿಸ್ ಮಾಡುತ್ತೇವೆ ಎಂದು ನಂಬಿಸಿದ್ದಾರೆ. ಅದಕ್ಕಾಗಿ ಇಬ್ಬರು ಬಳಿಯಿದ್ದ ಚಿನ್ನದ ಸರವನ್ನು ಪಾಲಿಸ್ ಮಾಡುವುದಾಗಿ ಹೇಳಿ ಚಿನ್ನವನ್ನು ಮೋಸದಿಂದ ದೋಚಿದ್ದಾರೆ. ಈ ಕುರಿತು ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.