ವಿಜಯಪುರ: ದಾಖಲೆ ಇಲ್ಲದ ಹಣ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ
ನಿಡಗುಂದಿ ತಾಲ್ಲೂಕಿನ ಯಲಗೂರ ಕ್ರಾಸ್ ಬಳಿಯ ಚೆಕ್ ಪೋಸ್ಟ್ ನಲ್ಲಿ ಶುಕ್ರವಾರ ನಡೆದಿದೆ. 1.5 ಲಕ್ಷ ಹಣ ಜಪ್ತಿಗೈದಿದ್ದಾರೆ. ಅಲ್ಲದೇ, ಶಂಕರಪ್ಪ ಕಡಮಾನೂರ ವಶಕ್ಕೆ ಪಡೆದುಕೊಂಡಿದ್ದಾರೆ. ಕಂದಾಯ ನಿರೀಕ್ಷಕ ವೆಂಕಟೇಶ ಅಂಬಿಗೇರ, ಪಿಎಸ್ಐ ಹೆಚ್ ವೈ ಬಾಲದಂಡಿ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ಇಳಕಲ್ ದಿಂದ ವಿಜಯಪುರಕ್ಕೆ ಟಾಟಾ ನೆಕ್ಷಾನ್ನಲ್ಲಿ ಸಂಚರಿಸುತ್ತಿದ್ದರು. ನಿಡಗುಂದಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಮತ್ತೊಂದು ಚೆಕ್ ಪೋಸ್ಟ್ನಲ್ಲಿ ಲಕ್ಷ ಲಕ್ಷ ಹಣ ಜಪ್ತಿ
![ಮತ್ತೊಂದು ಚೆಕ್ ಪೋಸ್ಟ್ನಲ್ಲಿ ಲಕ್ಷ ಲಕ್ಷ ಹಣ ಜಪ್ತಿ ಮತ್ತೊಂದು ಚೆಕ್ ಪೋಸ್ಟ್ನಲ್ಲಿ ಲಕ್ಷ ಲಕ್ಷ ಹಣ ಜಪ್ತಿ](https://karnataka1news.com/wp-content/uploads/2023/03/IMG-20230324-WA0055-860x645.jpg)