ರಾಯಚೂರು : ರಾಯಚೂರು ನಗರದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬೈಕ್ ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದಿಕ್ಕುಪಾಲಾಗಿ ಬಿದ್ದರೆ, ಇತ್ತ ಶಾಲೆಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿ ಹೊಡೆದು ಗಂಭೀರ ಸ್ಥಿತಿಯಲ್ಲಿದ್ದಾರೆ. ಕಾಲೇಜಿಗೆ ತೆರಳುತ್ತಿದ್ದ ಜ್ಯೋತಿ ಹಾಗೂ ಶಿವಮಂಗಳ ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿವೆ. ಇತ್ತ ಬೈಕ್ ಸವಾರ ಶಿವರಾಜ್ ಪಾಟೀಲ್ ಗೆ ಸಹ ಗಂಭೀರ ಗಾಯಗಳಾಗಿವೆ. ದೇವದುರ್ಗ ತಾಲೂಕು ಬೂಮನಗುಂಡ ತಾಲೂಕಿನ ಶಿವಮಂಗಳ, ಸಿರವಾರ ತಾಲೂಕು ಬೇವಿನೂರಿನ ಜ್ಯೋತಿ ಗಾಯಾಳುಗಳಾಗಿದ್ದು, ರಾಯಚೂರಿನ ಜಾಫರ್ ಅಹಮ್ಮದ್ ಕಾರ್ ಡ್ರೈವರ್ ನಿಂದ ಅಪಘಾತ ಸಂಭವಿಸಿದೆ. ರಾಯಚೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸಿದ್ದಾರೆ. ಕಳೆದ ವಾರ ನಗರದ ರಾಘವೇಂದ್ರ ಪೆಟ್ರೋಲ್ ಬಂಕ್ ಮುಂದೆ ಎದೆ ಝಲ್ ಎನಿಸುವ ಅಪಘಾತ ದೃಷ್ಯ ಸಿಸಿಟಿವಿಯಲ್ಲ ಸೆರೆಯಾಗಿದೆ.