ವಿಜಯಪುರ: ಕಾಲೇಜು ವಿದ್ಯಾರ್ಥಿನಿಯ ಅಪಹರಣಗೈದಿದ್ದ ಖಾಸಗಿ ಕಾಲೇಜಿನ ಬಸ್ ಚಾಲಕನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಖಾಸಗಿ ಕಾಲೇಜಿನ ಬಸ್ ಚಾಲಕ ಖಾಜೇಸಾಬ ಮಹ್ಮದಸಾಬ್ ಜಕಾತದಾರ ಬಂಧಿತ ಆರೋಪಿ. ವಿಜಯಪುರ ನಗರ ನಿವಾಸಿಯ 17 ವರ್ಷದ ಪುತ್ರಿನ್ನು ಚಾಲಕ ಅಪಹರಣಗೈದು ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದನು. ಇನ್ನು ಖಾಸಗಿ ಕಾಲೇಜಿನ ಬಸ್ ಚಾಲಕ ಖಾಜೇಸಾಬ ಮಹ್ಮದಸಾಬ್ ಜಕಾತದಾರನ ಬೆನ್ನಟ್ಟಿದ ಗ್ರಾಮೀಣ ಪೊಲೀಸ ಠಾಣಾ ಪಿಎಸ್ಐ ಉಪ್ಪಾರ ಆ್ಯಂಡ್ ಟೀಂ ಆರೋಪಿಯನ್ನು ಬಂಧಿಸಿ ಮಹಾ ಟೂ ಕರ್ನಾಟಕಕ್ಕೆ ಕರೆದುಕೊಂಡು ಬಂದಿದ್ದಾರೆ. ಅಲ್ಲದೇ, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.