ವಿಜಯಪುರ: ವಿಧಾನಸಭಾ ಚುನಾವಣೆ ಇನ್ನೇನು ಘೋಷಣೆ ಆಗಬೇಕಿದೆ. ಆದ್ರೇ, ಇದರ ಮಧ್ಯೆ ವಿವಿಧ ಪಕ್ಷದಿಂದ ಮತದಾರರ ಮನೆ ಬಾಗಿಲಿಗೆ ಆಮಿಷ ನೀಡಲಾಗುತ್ತಿದೆ.
ಹೌದು..! ಚುನಾವಣೆ ಸಂದರ್ಭದಲ್ಲಿ ಹಣ, ಹೆಂಡ, ಆಸೆ, ಆಮಿಷಗಳು ನೀಡುವುದು ಸರ್ವೇಸಾಮಾನ್ಯ. ಆದ್ರೇ, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂಬಿ ಪಾಟೀಲ ಮತ್ತು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೆಸರಿನ ಭಾವಚಿತ್ರ ಇರುವ ಹಿಟ್ಟಿನ ಗಿರಣಿಗಳನ್ನು ಮತದಾರರಿಗೆ ಕೆಲವರು ಹಂಚಿಕೆ ಮಾಡುತ್ತಿದ್ದಾರೆ. ಅಲ್ಲದೇ, ಕೆಲವು ಕಾಣದ ಕೈಗಳು ರಾಜಕೀಯ ಮಾಡುತ್ತಿದೆ. ಇದು ವೈಯಕ್ತಿಕವಾಗಿ ಕೆಲವರು ನೀಡುತ್ತಿದ್ದಾರೆ. ಇದಕ್ಕೆ ಶಾಸಕ ಎಂಬಿ ಪಾಟೀಲಗೆ ಯಾವುದೇ ಸಂಬಂಧ ಇರುವದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಶಾಸಕರ ಕಚೇರಿಯಿಂದ ಮಾಹಿತಿ ತಿಳಿಸಿದ್ದಾರೆ. ಅದಕ್ಕಾಗಿ ಕಾಣದ ಕೈಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.