ಮಹಾರಾಷ್ಟ್ರ: ಮಹಾರಾಷ್ಟ್ರದ ಬುಲ್ಡಾನಾನಲ್ಲಿ ಭೀಕರ ಬಸ್ ಅವಘಡದಲ್ಲಿ ಪ್ರಯಾಣಿಕರು ಸಜೀವ ದಹನ ಆಗಿದ್ದಾರೆ. ಚಲಿಸುತ್ತಿದ್ದ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡು 26 ಪ್ರಯಾಣಿಕರು ದುರ್ಮರಣ ಹೊಂದಿದ್ದಾರೆ. ಸಮೃದ್ಧಿ ಮಹಾಮಾರ್ಗ್ ಎಕ್ಸ್ಪ್ರೆಸ್ವೇನಲ್ಲಿ ದುರ್ಘಟನೆ ನಡೆದಿದೆ.
30 ಪ್ರಯಾಣಿಕರಿದ್ದ ಬಸ್ ನಾಗ್ಪುರದಿಂದ ಪುಣೆಗೆ ಹೋಗುವಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಘಟನೆಯಿಂದ ತಕ್ಷಣವೇ ಬೆಂಕಿ ಹೊತ್ತುಕೊಂಡಿದೆ. ಬಸ್ನ ಡ್ರೈವರ್ ಜಿಗಿದು ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾನೆ. ಬಸ್ ಸಿಬ್ಬಂದಿ ಸೇರಿ 33 ಮಂದಿ ಇದ್ದು, 26 ಮಂದಿ ದುರ್ಮರಣ ಹೊಂದಿದ್ದು, 7 ಮಂದಿ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
“ಮಹಾ” ಬಸ್ ದುರಂತ 26 ಜನ ದಹನ
![](https://karnataka1news.com/wp-content/uploads/2023/07/IMG_20230701_102235-860x530.jpg)