![](https://karnataka1news.com/wp-content/uploads/2024/05/IMG-20240524-WA0139.jpg)
ವಿಜಯಪುರ: ಬಸ್ ಏರುವಾಗ ಆಯುತಪ್ಪಿ ಬಿದ್ದ ಪರಿಣಾಮ ಮಹಿಳೆಯ ಕಾಲಿನ ಮೇಲೆ ಬಸ್ ಹರಿದು ಹೋಗಿರುವ ಘಟನೆ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಸಾವಿತ್ರಿಬಾಯಿ ಬಿರಾದಾರ ಕಾಲಿಗೆ ತೀವ್ರ ಪೆಟ್ಟಾಗಿದೆ. ಬಸ್ ಹತ್ತುವ ವೇಳೆ ಆಯತಪ್ಪಿ ಬಿದ್ದ ಸಾವಿತ್ರಿಬಾಯಿಯ ಕಾಲಿನ ಮೇಲೆ KA 28 F 2492 ನಂಬರಿನ ಬಸ್ ಹರಿದು ಹೋಗಿದೆ. ಗಾಯಾಳು ಸಾವಿತ್ರಿಬಾಯಿಯನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಯಿತು. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.