ವಿಜಯಪುರ: ಸಿಎಂ ಬಸವರಾಜ್ ಬೊಮ್ಮಾಯಿ ಸಿಎಂ ಸ್ಥಾನ ಬಿಟ್ಟು ಕೊಟ್ರೆ ಕೋವಿಡ್ ಹೋಗುತ್ತದೆ ಎಂದು ಸತೀಶ್ ರಾಠೋಡ ಹೇಳಿದರು.
ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನ ನನಗೆ ಬಿಟ್ಟು ಕೊಟ್ರೇ ಕೋವಿಡ್, ಭೂಕಂಪನ, ಪೆಟ್ರೋಲ್, ಡಿಸೇಲ್ ಕಡಿಮೆ ಆಗುತ್ತದೆ. ಸಿಎಂ ಸ್ಥಾನ ನನಗೆ ಬಿಟ್ಟು ಕೊಟ್ರೇ ಕೋವಿಡ್ ಹೋಗುತ್ತದೆ. ಇನ್ನೂ ಆ ಸ್ಥಾನ ನನ್ನದು. ಅದಕ್ಕಾಗಿ ಆದಷ್ಟು ಬೇಗನೆ ಜನತೆ ನನಗೆ ಸಿಎಂ ಸ್ಥಾನದಲ್ಲಿ ನೀಡಬೇಕು ಎಂದರು.