ವಿಜಯಪುರ: ಜಮೀನಿನ ಬದುವಿಗೆ ಸಂಬಂಸಿದಂತೆ ನಡೆದ ದಾಯಾದಿ ಕಲಹದಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸಗಳಿಂದ ಹೊಡೆದು ಕೊಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ಜಮೀನಿನಲ್ಲಿ ನಡೆದಿದೆ. ನಾಲತವಾಡ ಗ್ರಾಮದ ಬಾಲಪ್ಪ ಅಮರಪ್ಪ ಕ್ಷತ್ರಿ (47) ಕೊಲೆಗೀಡಾದವ. ಈತನ ಸಹೋದರನ ಪುತ್ರ ಆದಪ್ಪ ಪರಸಪ್ಪ ಕ್ಷತ್ರಿ ಹಾಗೂ ಇತರರು ಕೂಡಿ ಬಾಲಪ್ಪನನ್ನು ಕೊಲೆ ಮಾಡಿದ್ದಾರೆ ಎಂದು ಮುದ್ದೇಬಿಹಾಳ ಪೊಲೀಸರು ತಿಳಿಸಿದ್ದಾರೆ. ಜಮೀನಿನ ವ್ಯಾಜ್ಯಕ್ಕೆ ಸಂಬಂಸಿದಂತೆ ದಾಯಾದಿಗಳಲ್ಲಿ ಹಳೆ ವೈಷಮ್ಯವಿತ್ತು. ಬದುವಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಉಂಟಾದ ವಿವಾದ, ತಾರಕಕ್ಕೇರಿದಾಗ, ಆದಪ್ಪ ಕ್ಷತ್ರಿ ಕಡೆಯವರು ಮಾರಕಾಸಗಳಿಂದ ಬಾಲಪ್ಪನನ್ನು ಹೊಡೆದು ಕೊಲೆಗೈದು ಎಸ್ಕೇಪ್ ಆಗಿದ್ದಾರೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.