ವಿಜಯಪುರ: ಮಾಂಸಾಹಾರಿ ಅಂಗಡಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದ ಅಂಗಡಿಗಳ ಮೇಲೆ ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿಗೈದಿರುವ ಘಟನೆ ವಿಜಯಪುರದ ನಗರದ ಬಾಗಲಕೋಟ ಕ್ರಾಸ್ ಬಳಿ ಬುಧವಾರ ನಡೆದಿದೆ. ಮಹಾನಗರ ಪಾಲಿಕೆ ಆಯುಕ್ತ ಮೆಕ್ಕಳಕಿ ಹಾಗೂ ಪರಿಸರ ಅಭಿಯಂತರಾದ ಅಶೋಕ ಸಜ್ಜನ ನೇತೃತ್ವದಲ್ಲಿ ಅಂಗಡಿಯ ಮೇಲೆ ದಾಳಿಗೈದು ಸೀಜ್ ಹಾಗೂ ದಂಡ ವಿಧಿಸಿದ್ದಾರೆ. ಈ ದಾಳಿ ವೇಳೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷ ರಫೀಕ್ ಬಳಗಾರ, ಸುರೇಶ ದೊಂಬ್ಬಾಳೆ, ಅಪ್ಪು ಚಲವಾದಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.