ವಿಜಯಪುರ: ರಾಮನವಮಿ ಪ್ರಯುಕ್ತ ವಿಜಯಪುರ ನಗರದ ರಾಮಮಂದಿರ ದೇವಸ್ಥಾನದ ಬಳಿ ಗುರುವಾರ ಭಕ್ತರಿಗೆ ಮಜ್ಜಿಗೆ, ಕೊಸಂಬರಿ ಉಚಿತವಾಗಿ ವಿತರಣೆ ಮಾಡಿದರು. ದಿಶಾ ಫೌಂಡೇಶನ್ ವತಿಯಿಂದ ರಾಮನವಮಿಯ ಪ್ರಯುಕ್ತ ಭಕ್ತರಿಗೆ ಮಜ್ಜಿಗೆ , ಕೊಸಂಬರಿ ವಿತರಿಸಲಾಯಿತು. ದಿಶಾ ಫೌಂಡೇಶನ್ ಅಧ್ಯಕ್ಷೆ ಮಂಚಾಲೇಶ್ವರಿ ತೊನಶ್ಯಾಳ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು. ಶ್ರೀರಾಮನು ದೇಶದ ಸಂಸ್ಕೃತಿ ಹಾಗೂ ಆತ್ಮ ಆಗಿದ್ದಾರೆ ಎಂದು ದಿಶಾ ಫೌಂಡೇಶನ್ ಅಧ್ಯಕ್ಷೆ ಮಂಚಾಲೇಶ್ವರಿ ತೊನಶ್ಯಾಳ ಹೇಳಿದರು. ಶ್ರೀರಾಮನ ದೇಶದ ಆಸ್ತಿ. ಅವರನ್ನು ಶ್ರದ್ಧಾ ಭಕ್ತಿಯಿಂದ ಆರಾಧನೆ ಮಾಡಬೇಕು. ರಾಮನ ಆಶಯ ಇಡೀ ದೇಶದ ಮೇಲೆ ಇದೆ. ಅಲ್ಲದೇ, ರಾಮನ್ನು ಎಲ್ಲಾರೂ ಪೂಜಿಸಿ ಗೌರವಿಸಬೇಕು. ಇಡೀ ದೇಶವೇ ರಾಮನ ಜಪ್ ಮಾಡಬೇಕು ಎಂದರು.