ವಿಜಯಪುರ: ಅಕ್ರಮವಾಗಿ ಚಿಕನ್ ಪೀಸ್ನಲ್ಲಿ ಗಾಂಜಾವನ್ನು ಜೈಲಿನ ಕೈದಿಗೆ ಸಾಗಿಸುವ ವೇಳೆಯಲ್ಲಿ ಪೊಲೀಸರು ಗಾಂಜಾ ಜಪ್ತಿಗೈದಿರುವ ಘಟನೆ ವಿಜಯಪುರ ನಗರದ ದರ್ಗಾ ಜೈಲಿನಲ್ಲಿ ನಡೆದಿದೆ.
ಪ್ರಜ್ವಲ್ ಲಕ್ಷ್ಮಣ ಮಾಬರುಖಾನೆ ವಿರುದ್ಧ ಕೇಸ್ ದಾಖಲಾಗಿದ್ದು, ಇನ್ನು ಕೈದಿ ಶಾರುಕ್ಬಾನ್ ತೆಗರತಿಪ್ಪಿಗೆ ಚಿಕನ್ ಪೀಸ್ನಲ್ಲಿ ಪ್ರಜ್ವಲ ಗಾಂಜಾ ಸಪ್ಲೈಯ್ ಮಾಡುವಾಗ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ದೊಡ್ಡ ದೊಡ್ಡ ಚಿಕನ್ ಪೀಸ್ನಲ್ಲಿ 2 ಗ್ರಾಂನಷ್ಟು ಒಟ್ಟು 18 ಗಾಂಜಾ ಪಾಕೇಟ್ ವಶಕ್ಕೆ ತೆಗೆದುಕೊಂಡಿದ್ದಾರೆ. ಜೈಲ ಸಿಬ್ಬಂದಿಗಳಾದ ಬಾಳಪ್ಪ ದೇವಮಾನಿ, ತಿಮ್ಮಣ್ಣ ಕೆ, ರಾಮನಗೌಡ ಜಿ ಕರ್ತವ್ಯದಿಂದ ಈ ಕೇಸ್ ಬೆಳಕಿಗೆ ಬಂದಿದೆ. ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.