ವಿಜಯಪುರ: ಶಾಸಕ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂಬಿ ಪಾಟೀಲ್ ಯುವಕನಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಪ್ರಚಾರಕ್ಕೆ ಬಂದಾಗ ದೇವಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಏನ್ ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಯುವಕನಿಗೆ ಕಪಾಳಕ್ಕೆ ಏಟು ನೀಡಿದ್ದಾರೆ. ಎಲೆಕ್ಷನ್ ಬರ್ತಿದ್ದಂತೆ 5 ವರ್ಷದ ನಂತರ ಗ್ರಾಮಕ್ಕೆ ಆಗಮಿಸಿದ್ದೀರಿ. ನಮ್ಮ ಗ್ರಾಮಕ್ಕೆ ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಯುವಕ ಎಂಬಿ ಪಾಟೀಲಗೆ ಹಣಮಂತ ತುಪ್ಪದ ಪ್ರಶ್ನಿಸಿದ್ದಾನೆ. ಅದಕ್ಕಾಗಿ
ಯುವಕನ ಪ್ರಶ್ನೆಗೆ ಉತ್ತರಿಸಲಾಗದೆ ಕೆನ್ನೆಗೆ ಶಾಸಕ ಎಂಬಿ ಪಾಟೀಲ್ ಬಾರಿಸಿದ್ದಾರೆ. ಇದೀಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಯುವಕನಿಗೆ ಕಪಾಳಮೋಕ್ಷ ನೀಡಿದ ಎಂಬಿಪಿ
![](https://karnataka1news.com/wp-content/uploads/2023/04/IMG_20230423_155130-860x492.jpg)