ವಿಜಯಪುರ: ಲೋಕೋಪಯೋಗಿ ಇಲಾಖೆ ಎಇಇಗೆ ಬೂಟಿನಿಂದ ಹೊಡಿತ್ತೇನೆ ಎಂದು ಸಚಿವ ಉಮೇಶ್ ಕತ್ತಿ ಎಚ್ಚರಿಕೆ ನೀಡಿರುವ ಘಟನೆ ವಿಜಯಪುರದ ಭುರಣಾಪೂರದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿ ವೇಳೆ ನಡೆದಿದೆ.
ವಿಮಾನ ನಿಲ್ದಾಣ ಕಾಮಗಾರಿ ಬೇಗನೆ ಆಗಲಿಲ್ಲ ಎಂದ್ರೇ ಕಾರ್ಯನಿರ್ವಾಹಕ ಅಭಿಯಂತರ ಸಿಬಿ ಚಿಕ್ಕಲಗಿಗೆ ಬೂಟಿನಿಂದ ಹೊಡಿತಿನಿ ಎಂದು ಸಚಿವ ಕತ್ತಿ ಹೇಳಿದರು. ನವೆಂಬರ್ ಡಿಸೆಂಬರ್ ವೇಳೆಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ ಮಾಡ್ತೇವಿ ಎಂದು ಅಧಿಕಾರಿ ಮನವಿ ಮಾಡಿದರು.
ಇನ್ನು ಮಾಡಿದ್ರೆ ಮಾಲೆ ಹಾಕ್ತೀನಿ ಇಲ್ಲಂದ್ರೆ ಬೂಟಿನಿಂದ ಹೊಡಿತಿನಿ ಎಂದರು.