ವಿಜಯಪುರ: ಪ್ರಜಾಪ್ರಭುತ್ವ ವ್ಯಸವಸ್ಥೆಯಲ್ಲಿ ಮತದಾರರ ತೀರ್ಪು ಒಪ್ಪಲೇಬೇಕು ಎಂದು ಸಚಿವ ಎಂಬಿ ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ ಪ್ರತಿಕ್ರಿಯೆ ನೀಡಿದರು. ವಿಜಯಪುರದಲ್ಲಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದರು. ಮತದಾರರ ತೀರ್ಪು ಒಪ್ಪಬೇಕು. ಈ ಚುನಾವಣೆಯಲ್ಲಿ ಬಹಳಷ್ಟು ನಿರೀಕ್ಷೆ ಇತ್ತು. ಎಲ್ಲಿ ಯಡವಿದ್ದೀವಿ, ಯಾಕೆ ಈ ರೀತಿಯ ಫಲಿತಾಂಶ ಬಂತು ಎನ್ನುವ ಪಕ್ಷದಲ್ಲಿ ಚರ್ಚೆಯಾಗುತ್ತದೆ ಎಂದರು. ಗ್ಯಾರಂಟಿಗೆ ವಿರೋಧ ಮಾಡಿದವರು ಗ್ಯಾರಂಟಿ ಅನೌನ್ಸ್ ಮಾಡಿದ್ರು. ಕಾರಣಗಳು ಅನೇಕ ಇವೆ. ಕರ್ನಾಟಕದಲ್ಲಿ ಗ್ಯಾರಂಟಿ ವರ್ಕೌಟ್ ಆಗಿದೆ ಅಂತಾಯ್ತಲ್ಲ.
ಪಕ್ಷದ ವರಿಷ್ಠರು, ಸಿಡಬ್ಲೂಸಿಯಲ್ಲಿ ಚರ್ಚೆಯಾಗಲಿದೆ. ಅಲ್ಲದೇ, ಲೋಕಸಭಾ ಚುನಾವಣೆ ಮೇಲೆ ಪರಿಣಾಮ ವಿಚಾರಕ್ಕೆ ಪಾರ್ಲಿಮೆಂಟ್ ನಲ್ಲಿ ನಮಗೆ ವಿಶ್ವಾಸ ಇದೆ. ಬೆಲೆ ಏರಿಕೆ, ದೇಶದ ಪರಿಸ್ಥಿತಿ, ಮೋದಿ ಮಾತು ಕೊಟ್ಟಂತೆ ಆಗಿಲ್ಲ. ಅಚ್ಚೆ ದಿನ್ ಯಾರಿಗೂ ಬಂದಿಲ್ಲ. ಜನರು ಬದಲಾವಣೆ ಮಾಡ್ತಾರೆ ಎನ್ನುವ ವಿಶ್ವಾಸ ಇದೆ. ನೋಡೋಣ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದರು.
![](https://karnataka1news.com/wp-content/uploads/2023/12/IMG_20231203_153739-1024x576.jpg)
ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ..
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಹಿನ್ನೆಲೆ ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದ ಎದುರು ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ ಕೂಚಬಾಳ್ ನೇತೃತ್ವದಲ್ಲಿ ವಿಜಯೋತ್ಸವ ಮಾಡಿದರು. ಇನ್ನೂ ಪಟಾಕಿ ಸಿಡಿಸಿ, ತದನಂತರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಭಾರತ ಮಾತಕಿ ಜೈ, ಪ್ರಧಾನಿ ಮೋದಿಜೀ ಜೈ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ವಿಜಯ ಜೋಶಿ, ಕೃಷ್ಣಾ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.