ವಿಜಯಪುರ: ಸರ್ಕಾರ ಘೋಷಣೆ ಮಾಡಿರುವ ಮೀಸಲಾತಿಯನ್ನು ಒಪ್ಪಿಕೊಳ್ಳಬೇಕು ಎಂದು ಸಚಿವ ಮುರುಘೇಶ ನಿರಾಣಿ ಹೇಳಿದರು. ವಿಜಯಪುರ ನಗರದಲ್ಲಿರುವ ಜ್ಞಾನಯೋಗಾಶ್ರಮ ಶುಕ್ರವಾರ ಭೇಟಿ ನೀಡಿ ಸಿದ್ಧೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿ ತದನಂತರ ಮಾತನಾಡಿದ ಅವರು, ಇರುವ ಸ್ಥಾನಗಳಲ್ಲಿ ಎಲ್ಲರಿಗೂ ಹಂಚಿಕೆ ಮಾಡಲಾಗಿದೆ.
ಮೂರು ತಿಂಗಳಲ್ಲಿ ಇದರ ಸ್ಪಷ್ಟರೂಪ ತಿಳಿಯಲಿದೆ. ಅಂತಿಮ ವರದಿ ಬಳಿಕ ಯಾರಿಗೆ ಎಷ್ಟು ಪ್ರತಿಷತ ಮೀಸಲಾತಿ ಎಂದು ಗೊತ್ತಾಗುತ್ತದೆ ಎಂದು ಪರೋಕ್ಷವಾಗಿ ಕೂಡಲಸಂಗಮ ಸ್ವಾಮಿಜೀಗಳಿಗೆ ಟಾಂಗ್ ನೀಡಿದರು. ನಮ್ಮ ಸಮಾಜದ ಜನ ಜಾಗೃತರಾಗಿದ್ದಾರೆ. ಯಾರೋ ಕೆಲವರು ಒಪ್ಪೋದಿಲ್ಲ ಎಂದರೆ ಆಗೋದಿಲ್ಲ. ಜನರು ಇದರ ಬಗ್ಗೆ ತೀರ್ಮಾನ ಮಾಡುತ್ತಾರೆ. ಮೀಸಲಾತಿ ಎಲ್ಲರಿಗೂ ಸಹಾಯಕವಾಗಲಿ ಎಂದರು. ಅಲ್ಲದೇ, ಶ್ರೀಗಳು ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡಬಾರದು. ಶ್ರೀಗಳ ಮೊದಲಿನಂತೆ ಎಲ್ಲರಿಗೂ ದರ್ಶನ ನೀಡುತ್ತಾರೆ ಎಂದರು.