ವಿಜಯಪುರ: ಕಾಂಗ್ರೆಸ್ ಟಿಕೆಟ್ಗಾಗಿ
ಬಬಲೇಶ್ವರಕ್ಕೆ ಅರ್ಜಿ ಕೊಟ್ಟಿರುವುದು ನಿಜ. ಬಸವನಬಾಗೇಬಾಡಿ ಕೊಟ್ಟಿರುವೆ. ವರಿಷ್ಠರು ಎಲ್ಲಿ ಸಲಹೆ ನೀಡುತ್ತಾರೆ. ಅಲ್ಲಿ ನಿಲ್ಲಬೇಕಾಗುತ್ತದೆ ಎಂದು ಶಾಸಕ ಶಿವಾನಂದ ಪಾಟೀಲ್ ಹೇಳಿದರು.
ವಿಜಯಪುರ ನಗರದಲ್ಲಿ ರವಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವನಬಾಗೇಬಾಡಿ, ವಿಜಯಪುರ, ಬಬಲೇಶ್ವರ ಎಲ್ಲಿ ಕೊಟ್ಟರೂ ನಿಲ್ಲುವುದಾಗಿ ಹೇಳಿದ್ದೇನೆ. ಯಾರೋ ಒಬ್ಬರು ಬ್ಲಾಕ್ ಮೇಲ್ ಮಾಡುವುದಾಗಿ ಹೇಳಿದ್ದಾರೆ. ಅದು ನನ್ನ ರಾಜಕೀಯದಲ್ಲಿಲ್ಲ. ಬಬಲೇಶ್ವರ ಜನರ ಪ್ರೀತಿ ಇನ್ನೂ ಇದೆ. ನಾನು ಹೇಳದೇ ಬಿಟ್ಟು ಹೋಗಿರುವುದು ತಪ್ಪು. ಆ ನೋವು ಇದೆ. ನನ್ನ ಪುತ್ರಿಗೆ ಅರ್ಜಿ ಕೊಡಲು ಬೇಡ ಎಂದಿದ್ದೆ. ಆದರೂ ಅರ್ಜಿ ಸಲ್ಲಿಸಲು ಎಲ್ಲರೂ ಸ್ವತಂತ್ರರೇ ಅಲ್ಲವಾ? ಎಂದರು.
ಮೂರು ಟಿಕೆಟ್ಗಾಗಿ ಅರ್ಜಿ ಸಲ್ಲಿಸಿರುವೇ ಶಾಸಕ ಶಿವಾನಂದ ಪಾಟೀಲ್
![](https://karnataka1news.com/wp-content/uploads/2023/02/IMG_20230226_154038-860x371.jpg)