ವಿಜಯಪುರ/Vijaypur: ಶಾಸಕ ಬಸನಗೌಡ ಪಾಟೀಲ ಯತ್ನಾಳ ವೈಡ್ ಬಾಲ್ ಹಾಕ್ತಾರೆ ಎಂದು ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಲೇವಡಿ ಮಾಡಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಶಾಸಕ ಯತ್ನಾಳರ ಎಲ್ಲಾ ಬಾಲುಗಳು ವಿಕೆಟ್ ಹಾರುತ್ತಾವೇ ಎನ್ನುವ ಹಾಗಿಲ್ಲ.
ಯತ್ನಾಳ ಹೇಳಿಕೆಯಿಂದ ಪಕ್ಷಕ್ಕೆ ಏನು ಆಗಲ್ಲ ಎಂದು ಕಿಡಿಕಾರಿದರು. ಅಲ್ಲದೇ, ಹಲವಾರು ಮಾಜಿ ಶಾಸಕರು, ಮುಖಂಡರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮೆಚ್ಚಿಕೊಂಡು ಹಲವರು ಬರುತ್ತಿದ್ದಾರೆ. ಕಾಂಗ್ರೆಸ್ ಸೇರಲು ತುದಿಗಾಲು ಮೇಲೆ ನಿಂತಿದ್ದಾರೆ. ಇನ್ನೂ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕೈ ಸೇರ್ಪಡೆ ವಿಚಾರಕ್ಕೆ ಪ್ರಕ್ರಿಯೆ ನೀಡಿದ ಅವರು, ನಾವೇನು ಅವರಿಗೆ ಎದುರಾಳಿ ಅಲ್ಲ. ಮುನೇನಕೊಪ್ಪ ಅವರಿಗೆ
ರಾಜಕೀಯದಲ್ಲಿ ಅನುಭವ ಇದೆ. ಪಕ್ಷಕ್ಕೆ ಬಲ ತುಂಬವರು ಪಕ್ಷಕ್ಕೆ ಬಂದ್ರೇ ಸೇರಿಸಿಕೊಳ್ಳುತ್ತೇವೆ ಎಂದರು.
ಶಾಸಕ ಯತ್ನಾಳ ವಿರುದ್ಧ ಶಾಸಕ “VK” ಕಿಡಿ
![](https://karnataka1news.com/wp-content/uploads/2023/08/IMG_20230819_122340-860x698.jpg)