ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ ಎದುರು ಯುವಕರು ಮೋದಿ ಮೋದಿ, ಜೈ ಶ್ರೀರಾಮ್ ಘೋಷಣೆ ಕೂಗಿರುವ ಘಟನೆ
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ. ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ತದನಂತರ ಸಮಾವೇಶ ಮುಗಿಸಿಕೊಂಡಿ ವಾಪಸ್ ತೆರಳುವಾಗ ಮೋದಿ ಮೋದಿ ಎಂದು ರಸ್ತೆ ಬದಿ ನಿಂತಿದ್ದ ಯುವಕರು ಕೂಗಿದ್ದಾರೆ. ಸಿದ್ದರಾಮಯ್ಯ ಕಾರ್ ಬರ್ತಿದ್ದಂತೆ ಜೈ ಶ್ರೀರಾಮ್ ಎಂದಿದ್ದಾರೆ. ವಾಹನ ದಟ್ಟಣೆಯ ನಡುವೆ ಸಿದ್ದರಾಮಯ್ಯ ಸುಮ್ಮನೆ ತೆರಳಿದ್ದಾರೆ. ಇದೀಗ ವಿಡಿಯೋ ವೈರಲ್ ಆಗುತ್ತಿದೆ.
ಸಿದ್ದರಾಮಯ್ಯ ಕಾರ್ ಎದುರು ಮೋದಿ ಮೋದಿ ಘೋಷಣೆ
![](https://karnataka1news.com/wp-content/uploads/2023/02/IMG_20230224_102552-860x1267.jpg)