ವಿಜಯಪುರ: ನಾನು ಯಾರ ಕಾಲು ಹಿಡಿಯಲು ಹೋಗಿಲ್ಲ. ನಾನು ಅಟಲ್ ಬಿಹಾರಿ ವಾಜಪೇಯಿ, ಅದ್ವಾನಿ ಕಾಲು ನಮಸ್ಕಾರ ಮಾಡಿದ್ದೇನೆ ಎಂದು ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ತುಮಕೂರು ಸಿದ್ಧಗಂಗಾ, ಸಿದ್ಧೇಶ್ವರ ಶ್ರೀಗಳ ಕಾಲು ನಮಸ್ಕಾರ ಮಾಡಿದ್ದೇನೆ. ಆದ್ರೇ, ತಲೆ ಹಿಡುಕು ಸ್ವಾಮಿಗಳ ಕಾಲು ಮುಗಿಯಲ್ಲ ಎಂದ ಮುರುಘಾ ಶ್ರೀಗಳ ವಿರುದ್ಧ ಕಿಡಿಕಾರಿದರು. ಅಲ್ಲದೇ, ಸ್ವಾಮಿಗಳನ್ನು ತಲೆ ಹಿಡುಕರಾಗಿದ್ದಾರೆ. ತಲೆ ಹಿಡುಕರು ರಾಜಕೀಯ ಬಂದ್ಮೇಲೆ ನಮ್ಮಂಥವರಿಗೆ ತೊಂದರೆ ಆಗಿದೆ. ರಾಜಕಾರಣಿಗಳು ಸ್ವಾಮೀಜಿಗಳನ್ನು ಮನೆಗೆ ಕರೆದು ಸೀರೆ, ಬಂಗಾರ, ಲಕ್ಷಗಟ್ಟಲೆ ಹಣ ಕೊಡುವುದು ಮಾಡ್ತಾರೆ. ಈ ದಂಧೆ ಯತ್ನಾಳಗೆ ಗೊತ್ತು ಇಲ್ಲ ಎಂದು ನಿರಾಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ನಿರಾಣಿ ಬಚ್ಚಾ ಅದಾನೋ ನನಗೆ ಗೊತ್ತಿಲ್ಲ. ಅದು ಜನರಿಗೆ ಗೊತ್ತು ಇದೆ. ಮೊನ್ನೆ ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟ ನೋಡಿ ಹತಾಶೆ ಆಗಿದ್ದಾರೆ ಎಂದರು.
ಇನ್ನು ಡಿಸೆಂಬರ್ 29ಕ್ಕೆ ಮೀಸಲಾತಿ ಘೋಷಣೆ ಆಗುವ ಭರವಸೆ ಇದೆ. 2ಎ ಸಮಾನವಾದ ಮೀಸಲಾತಿ ಸಿಗುತ್ತದೆ. ತಾಯಿ ಆಣೆ ಮಾಡಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಪಂಚಮಸಾಲಿ 2ಎ ಮೀಸಲಾತಿ ನೀಡುವುದಾಗಿ ತಾಯಿ ಆಣೆ ಮಾಡಿದ್ದಾರೆ. ತಾಯಿ ಆಣೆ ಮಾಡಿದ್ಮೇಲೆ ಕೊಡಲಿಲ್ಲ ಅಂದ್ರೇ ಏನು ಆಗುತ್ತದೆ ನೋಡಿ. ಅಲ್ಲದೇ, ಆಣೆ ಮಾಡಿದ್ಮೇಲೂ ಎಚ್ಡಿ ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ನೀಡಲಿಲ್ಲ. ಅದಕ್ಕಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ವಚನ ಭ್ರಷ್ಟತೆ ಇರುತ್ತದೆ, ಅದಕ್ಕಾಗಿ ಸಿಎಂ ಭರವಸೆ ಈಡೇರಿಸುತ್ತಾರೆ ಎಂದರು.