ವಿಜಯಪುರ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತು ಜಿಲ್ಲಾ ಸಂಸದ ರಮೇಶ ಜಿಗಜಿಣಗಿ ಮಧ್ಯೆ ಹಾವು, ಮುಂಗುಸಿವಿದ್ದಂತೆ. ಅಂತಹದರದಲ್ಲಿ ನಡು ರಸ್ತೆಯಲ್ಲೆ ಶಾಸಕ ಯತ್ನಾಳ್ ಕಾಲು ಹಿಡಿದು ಸಂಸದ ರಮೇಶ ಜಿಗಜಿಣಗಿ ಸ್ವಂತ ಅಣ್ಣ ಸಿದ್ರಾಮ ಜಿಗಜಿಣಗಿ ನನಗೆ ಸಮಯ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ವಿಜಯಪುರದ ವಾಟರ್ ಟ್ಯಾಂಕ್ ಬಳಿ ಶಾಸಕ ಯತ್ನಾಳ್ ಕಾಲು ಮುಗಿದು ಭೇಟಿಗೆ ಸಮಯವನ್ನು ಸಿದ್ರಾಮ ಜಿಗಜಿಣಗಿ ಕೇಳಿಕೊಂಡರು. ಅಲ್ಲದೇ, 5 ಎಕರೆ ಜಮೀನು ಕಬಳಿಸಿರುವುದಾಗಿ ಯತ್ನಾಳ ಬೆಂಬಲಿಗರು ಯತ್ನಾಳಗೆ ಮಾಹಿತಿ ನೀಡಿದ್ದಾರೆ.