ವಿಜಯಪುರ: 18 ಸಾವಿರ ಹಣಕ್ಕಾಗಿ ವ್ಯಕ್ತಿಯನ್ನು ನಾಲ್ವರು ಹತ್ಯೆಗೈದಿರುವ ಘಟನೆ ವಿಜಯಪುರ ನಗರದ ಗುಲಾಮ್ಹುಸೇನ ಗಲ್ಲಿಯ ಬಳಿ ನಡೆದಿದೆ. ಶಹಬಾಜ್ ಶೇಖ್ ಮೃತಪಟ್ಟಿರುವ ದುರ್ದೈವಿ. ಇನ್ನು ಸಮೀರ ಕೊಕಟನೂರ, ಫೈಜಾನ್, ರಿಹಾನ್, ರೆಹಮಾನ್ ಇನಾಂದಾರ್ ಹತ್ಯೆಗೈದಿರುವ ಆರೋಪಿಗಳು. ಆರೋಪಿ ಸಮೀರ ಕೊಕಟನೂರಗೆ ಶೇಖ್ 18 ಸಾವಿರ ಹಣ ಸಾಲ ನೀಡಿದ್ದಾನೆ. ಅದಕ್ಕಾಗಿ ಹಣ ನೀಡುವಂತೆ ರಸ್ತೆಯ ಮಧ್ಯದಲ್ಲಿ ಶೇಖ್ ಕೇಳಿದ್ದಾನೆ. ಇದರಿಂದ ಕುಪಿತಗೊಂಡು ಸಮೀರ ಆ್ಯಂಡ್ ಆರೋಪಿಗಳು ಸೇರಿಕೊಂಡು ರಾಡ್ನಿಂದ ಹೊಡೆದು ಹತ್ಯೆಗೈದಿದ್ದಾರೆ. ಈ ಕುರಿತು ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.