![](https://karnataka1news.com/wp-content/uploads/2024/02/IMG_20240207_085245-653x1024.jpg)
ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಓರ್ವನ್ನು ಹತ್ಯೆಗೈದಿರುವ ಘಟನೆ ಧಾರವಾಡ ನಗರದ ವಿಮಲ್ ಹೊಟೇಲ್ನಲ್ಲಿ ನಡೆದಿದೆ. ವಿಮಲ್ ಹೋಟೆಲ್ನಲ್ಲಿ ಕುಕ್ ಆಗಿದ್ದ ಹಾಗೂ ಶಿರಹಟ್ಟಿ ತಾಲೂಕಿನ ಸುಗನಳ್ಳಿ ಗ್ರಾಮದ ಫಕೀರೇಶ ಪ್ಯಾಟಿ ಮೃತಪಟ್ಟಿದ್ದಾನೆ. ಇನ್ನು ಆರೋಪಿಯು ತಮಿಳುನಾಡು ಮೂಲದ ಕನೈಯಪ್ಪ ಕನಯ್ಯ ಕೇ ಎನ್ನಲಾಗಿದೆ. ಅಲ್ಲದೇ, ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಧಾರವಾಡ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇನ್ನೂ ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)