ವಿಜಯಪುರ: ಭೀಮಾತೀರದಲ್ಲಿ ವೃದ್ಧನ್ನು(Old Man) ದುಷ್ಕರ್ಮಿಗಳು ಹತ್ಯೆಗೈದಿರುವ(Murder) ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಘಟನೆ ನಡೆದಿದೆ. 75 ವರ್ಷದ ವೃದ್ಧ ಮಲ್ಲೇಶಿ ಮಡವಾಳಪ್ಪ ಕಾರಕಲ್ ಹತ್ಯೆಯಾಗಿರುವ ದುರ್ದೈವಿ. ಇನ್ನು ವೃದ್ಧನ್ನು ಹತ್ಯೆಗೈದು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಅಲ್ಲದೇ, ತೋಟದಲ್ಲಿದ್ದಾಗ ವೃದ್ಧನಿಗೆ ಚಾಕು ಇರಿದು ಕೊಲೆಗೈದು ಪರಾರಿಯಾಗಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಇಂಡಿ(Indi) ಗ್ರಾಮೀಣ ಪೊಲೀಸ (Police) ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.