ದಾವಣಗೆರೆ: ಚಿಕನ್ ಸಾಂಬಾರ ಮಾಡದಕ್ಕೆ ಹೆಂಡತಿಯನ್ನೆ ಚಾಕುವಿನಿಂದ ಇರಿದು ಪಾಪಿ ಗಂಡ ಕೊಲೆಗೈದಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಘಟನೆ ನಡೆದಿದೆ ಶೀಲಾಳನ್ನು ಕೆಂಚಪ್ಪನೇ ಕೊಲೆ ಮಾಡಿದ್ದಾನೆ.
ರೋಡ್ ರೋಲರ್ ಅಪರೇಟರ್ ಆಗಿರುವ ಕೆಂಚಪ್ಪ ಮೊದಲ ಹೆಂಡತಿಗೆ ಮಕ್ಕಳಾಗಲಿಲ್ಲ ಎಂದು ಎರಡನೇ ಮದುವೆ ಮಾಡಿಕೊಂಡಿದ್ದ. ಇನ್ನೂ ಶೀಲಾ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಕೆಂಚಪ್ಪ ಆಕೆಯೊಂದಿಗೆ ಜಗಳವಾಡುತ್ತಿದ್ದ. ಇನ್ನು ಚಿಕನ್ ಸಾರು ಮಾಡ್ಲಿಲ್ಲ ಎಂದು ಹೆಂಡತಿಯೊಂದಿಗೆ ಜಗಳ ತೆಗೆದು ಹತ್ಯೆಗೈದಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.