ಬೆಳಗಾವಿ: ಜಿಲ್ಲೆಯ ಖಾನಾಪುರ ನಗರದಲ್ಲಿ ಅದ್ದೂರಿಯಾಗಿ ಕೊಡುಗೈ ಧಾನಿ ಕಲಿಯುಗದ ಕರ್ಣನೆಂದೆ ಖ್ಯಾತಿಯಾದ ನಾಸೀರ ಭಾಗವಾನರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ಖಾನಾಪೂರ ತಾಲೂಕಿನ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯಾದ ನಾಸೀರ ಭಾಗವಾನರ ಹುಟ್ಟುಹಬ್ಬವು ಸರ್ವ ಧರ್ಮದ ಗಣ್ಯಮಾನ್ಯರ ಸಮ್ಮುಖದಲ್ಲಿ ವಿಜೃಂಬಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ತಾಲೂಕಿನ ಜನಸಾಗರ ಹರಿದು ಬಂದಿತ್ತು. ಸಮಾರಂಭದಲ್ಲಿ ಸುಮಾರು 70 ರಿಂದ 80 ಸಾವಿರ ಅಭಿಮಾನಿಗಳು ಉಪಸ್ಥಿತರಿದ್ದರೆಂದು. ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಆಗಮಿಸಿದ ಸರ್ವ ಧರ್ಮದ ಮಠಾಧೀಶರು, ಅಲ್ಪಸಂಖ್ಯಾತ ಧರ್ಮಗುರುಗಳು ಹಾಗೂ ಸಂತ ಮಹಾರಾಜರು ಉಪಸ್ಥಿತಿ ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ಪಕ್ಷವು ರೈತರ, ಬಡವರ ಹಾಗೂ ಮಹಿಳೆಯರ ಅಭಿವೃದ್ದಿ ಪರವಾಗಿದೆ. ನುಡಿದಂತೆ ನಡೆದ ಪಕ್ಷ ಜೆಡಿಎಸ್ ಪಕ್ಷ ಆಗಿದೆ ಎಂದರು.
ನಾಸೀರ ಭಾಗವಾನರ ಮಾತನಾಡಿ, ನನ್ನ ಅಭಿವೃದ್ದಿ ಕೆಲಸಗಳು ನನ್ನ ಕೈ ಹಿಡಿದಿವೆ. ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರಿಗೂ ಅವಕಾಶ ಕೊಟ್ಟು ನೋಡಿದ್ದಿರಿ. ಇದೊಂದು ಬಾರಿ ನನಗೆ ಅವಕಾಶ ಕೊಟ್ಟ ನೋಡಿ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿರುವ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾದರೆ ನನ್ನ ಸ್ವಂತ ಖರ್ಚಿನಲ್ಲಿ ತಾಲೂಕಿನ ಸರ್ವಾಂಗೀಣ ಅಭಿವೃದ್ದಿ ಮಾಡುತ್ತೇನೆ ಎಂದರು.