ಧಾರವಾಡ: ಅತ್ತೆ ಬೈದಿದ್ದಾಳೆ ಎಂದು ಮಾನಸಿಕವಾಗಿ ಮನನೊಂದ ಅಳಿಯ ನೇಣಿಗೆ ಶರಣಾಗಿರುವ ಘಟನೆ ವಿದ್ಯಾಕಾಶಿಯಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದ ಮಾದರ ಓಣಿಯಲ್ಲಿ 36 ವರ್ಷದ ಕಲ್ಲಪ್ಪ ಹೊಸಮನಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ತನ್ನ ಹೆಂಡತಿಯನ್ನು ಅತ್ತೆಯ ಮನೆಗೆ ಕರೆಯಲು ಹೋದಾಗ ಅತ್ತೆ ಬೈದು ಅವಮಾನಿಸಿದ್ದಳು. ಅದಕ್ಕಾಗಿ ನನ್ನ ಸಾವಿಗೆ ನನ್ನ ಅತ್ತೆ ಸಾವಕ್ಕ ನಾಗಗುಂಡಿ ಕಾರಣ ಎಂದು ಬಲಗೈಯಲ್ಲಿ ಬರೆದುಕೊಂಡು ಮನೆಯ ಎದುರಿನ ಜಂತಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಗರಗ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.