ವಿಜಯಪುರ: ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಸಿಂದಗಿ ಕ್ಷೇತ್ರದಲ್ಲಿ ಮೊದಲು ಜೆಡಿಎಸ್ ಉತ್ತಮ ಸಂಘಟನೆ ಇತ್ತು. ಮಾಜಿ ಸಚಿವ ಎಂಸಿ ಮನಗೂಳಿ ನಿಧನದ ನಂತರ ಅವರ ಕುಟುಂಬದವರು ಕಾಂಗ್ರೆಸ್ ಗೆ ಪಕ್ಷಾಂತರವಾದ್ರು ಎಂದು ವಿಜಯಪುರ ಜಿಲ್ಲೆಯ ಸಿಂದಗಿ ಕನ್ನೊಳ್ಳಿ ಕ್ರಾಸ್ ನಲ್ಲಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೇಳಿದರು. ಈ ಬಾರಿ ಸಿಂದಗಿಯಲ್ಲಿ ಜೆಡಿಎಸ್ ಗೆ ಜನರು ಬೆಂಬಲಿಸುವ ವಿಶ್ವಾಸ ಇದೆ. ಸಿಂದಗಿ ಕ್ಷೇತ್ರಕ್ಕೆ ಶಿವಾನಂದ ಪಾಟೀಲ ಸೋಮಜಾಳ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ ಎಂದರು.
*ನಮೋ ವಿರುದ್ಧ ಎಚ್ಡಿಕೆ ವಾಗ್ದಾಳಿ*
ನಾಳೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿಗೆ ಹಿನ್ನೆಲೆ ಮೋದಿ ವಿರುದ್ಧ ಎಚ್ಡಿಕೆ ವ್ಯಂಗ್ಯ ಮಾಡಿದರು. ಮೋದಿಯವರು ರಾಜ್ಯಕ್ಕೆ ಬರಲೇಬೇಕಲ್ಲವೇ.
ರಾಜ್ಯದ ಸಮಸ್ಯೆಗೆ ಸ್ಪಂದಿಸ್ತಾರಾ ನೋಡೋಣ. ಒಂದೇ ತಿಂಗಳಲ್ಲಿ 25 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಮಸ್ಯೆಗೆ ಏನು ಹೇಳುತ್ತಾರೋ ನೋಡೋಣ ಎಂದರು.
ಅಲ್ಲದೇ, ಏನೋ ಕಂದಾಯ ಗ್ರಾಮ ಮಾಡಿ ಹಕ್ಕು ಪತ್ರ ವಿತರಿಸೋಕೆ ಏನು ದೇಶ ಸೇವೆ ಮಾಡಲಿಲ್ಲ. ಹಕ್ಕುಪತ್ರ ವಿತರಿಸೋಕೆ ಹೋಗ್ತಿದ್ದಾರೆ.
ಹಕ್ಕು ಪತ್ರ ಕೊಡೋದರಲ್ಲಿ ಏನಿದೆ..? ಇದೊಂದು ನಾಟಕ ಎಂದು ಲೇವಡಿ ಮಾಡಿದರು.
ನಾರಾಯಣಪುರ ಸ್ಕಾಡಾ ಯೋಜನೆಗೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಅನುದಾನ ವಿಚಾರಕ್ಕೆ ಬಿಜೆಪಿ ರಾಜ್ಯ ಸರ್ಕಾರಕ್ಕೆ ಜನಪರ ಕೆಲಸ ಮಾಡುವ ಶಕ್ತಿ ಇಲ್ಲ.
ನಾನು ಮೈತ್ರಿ ಸರ್ಕಾರದಲ್ಲಿ ಎಂಟ್ಹತ್ತು ಸಭೆ ಮಾಡಿ, ನಾವು ಕೆಲಸ ಮಾಡಿದ್ದೇವೆ. ಈಗ ಉದ್ಘಾಟನೆಗೆ ಬರ್ತಿದ್ದಾರೆ ಎಂದರು.