ವಿಜಯಪುರ: ಸಿಎಂ ಬಸವರಾಜ್ ಬೊಮ್ಮಾಯಿಗೆ ಗೋವು ಹಾಯಲು ಬಂದಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಕೊಡಗಾನೂರ ಗ್ರಾಮದಲ್ಲಿ ನಡೆದಿದೆ.
ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆ ಮೊದಲ ಹಂತ ಉದ್ಘಾಟನೆ ವೇಳೆಯಲ್ಲಿ ಗೋವಿಗೆ ಸಿಎಂ ಬೊಮ್ಮಾಯಿ ಪೂಜೆ ಸಲ್ಲಿಸಿ ಗೋವಿನ ಮೈಮೇಲೆ ಕೈಯಾಡಿಸಿ ಮುತ್ತಿಕ್ಕಿದರು. ಬಳಿಕ ಸಿಎಂ ಗೋವು ಮಟ್ಟಲು ಹೋದಾಗ ಗಲಿಬಿಲಿಗೊಂಡು ಹಾಯಿಲು ಬಂದಿದೆ. ಈ ವೇಳೆಯಲ್ಲಿ ರೈತ ಗೋವನ್ನು ಹಿಡಿದುಕೊಂಡಿರುವ ಪರಿಣಾಮ ಸಿಎಂ ಬಚಾವ್ ಆಗಿದ್ದಾರೆ.