ವಿಜಯಪುರ: ವಿದ್ಯುತ್ ತಡವಾಗಿ ನೀಡಿದಕ್ಕೆ ಕೆಇಬಿ ಆಪರೇಟರ್ ಜೊತೆಗೆ ಕಿಡಿಗೇಡಿಗಳು ಜಗಳಗೈದು ತಲೆಗೆ ಕಲ್ಲಿನಿಂದ ಹೊಡೆದು ಪರಾರಿಯಾಗಿರುವ ಘಟನೆ ವಿಜಯಪುರ ತಾಲ್ಲೂಕಿನ ಹೊನ್ನುಟಗಿ ಗ್ರಾಮದಲ್ಲಿ ನಡೆದಿದೆ.
ಇನ್ನು ಕರ್ತವ್ಯದಲ್ಲಿದ್ದ ಕೆಇಬಿ ಆಪರೇಟರ್ ಸ್ಥಳಕ್ಕೆ ಮದಭಾವಿಯ ಕೆಲವು ಕಿಡಿಗೇಡಿಗಳು ಹೊನ್ನುಟಗಿಗೆ ಬಂದು ಕರೆಂಟ್ ತಡ ಮಾಡಿ ಹಾಕಿದ್ದೀಯಾ ಅಂತ ಜಗಳ ಮಾಡಿ, ತಲೆಗೆ ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದಾರೆ. ಅಲ್ಲದೇ, ಗಲಾಟೆ ಮಾಡಿರುವ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.