![](https://karnataka1news.com/wp-content/uploads/2024/07/nikhil.jpg)
ಬೆಂಗಳೂರು:
ರಾಜ್ಯದಲ್ಲಿ ಈಗಿರುವ ಕಾಂಗ್ರೇಸ್ ನೇತೃತ್ವದ ಸರ್ಕಾರ ಇನ್ನೂ ಮುಂದೆ ತುಂಭಾ ದಿನ ಉಳಿಯುವದಿಲ್ಲ, ಕೆಲವು ದಿನಗಳಲ್ಲಿ ಸರ್ಕಾರ ಪತನವಾಗುತ್ತದೆ ಎಂದು ರಾಜ್ಯ ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಗ್ಯಾರಂಟಿಗಳನ್ನು ಕೊಟ್ಟೂ ಕಾಂಗ್ರೆಸ್ ಸರಕಾರವು ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದೆ. ಐದು ಗ್ಯಾರಂಟಿಗಳ ನಿರ್ವಹಣೆಗಾಗಿ ರಾಜ್ಯ ಸರಕಾರ ಎಲ್ಲ ವಸ್ತುಗಳ ಬೆಲೆ ಏರಿಸುತ್ತಿದೆ. ಇದರ ವಿರುದ್ಧ ಜೆಡಿಎಸ್ ಹೋರಾಟ ಮಾಡುತ್ತಿದೆ. ಲೋಕಸಭೆ ಚುನಾವಣೆ ಫಲಿತಾಂಶದಿಂದ ಬೇಸರಗೊಂಡಿರುವ ಕಾಂಗ್ರೆಸ್ ನಾಯಕರೇ ಗ್ಯಾರಂಟಿಗಳನ್ನು ರದ್ದು ಮಾಡಬೇಕು ಎನ್ನುತ್ತಿದ್ದಾರೆ. ನಮ್ಮ ಜನ ಗ್ಯಾರಂಟಿಗಳನ್ನು ನಂಬಿಕೊಂಡು ಜೀವನ ಮಾಡುತ್ತಿಲ್ಲ. ಜನರು ಗ್ಯಾರಂಟಿಯನ್ನು ಕೇಳಿರಲಿಲ್ಲ. ಆದರೆ, ಗ್ಯಾರಂಟಿಗಳನ್ನು ಕೊಟ್ಟೂ ಕಾಂಗ್ರೆಸ್ ಸರಕಾರವು ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದೆ. ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಆಗಿ ಮುಂದುರಿಸುತ್ತದೋ ಅಥವಾ ಬೇರೆಯವರನ್ನು ಮಾಡುವುದೋ ಗೊತ್ತಿಲ್ಲ. ಇದೀಗ ಐದು ಮಂದಿ ಉಪಮುಖ್ಯಮಂತ್ರಿ ವಿಚಾರ ಕಾಂಗ್ರೆಸ್ ಪಕ್ಷದೊಳಗೆ ಕೋಲಾಹಲ ಸೃಷ್ಟಿಸಿದೆ. ಐದು ಜನರನ್ನು ಡಿಸಿಎಂ ಮಾಡುತ್ತಾರೋ ನೋಡೋಣ. ಆದರೆ, ಈ ಸರಕಾರ ಜಾಸ್ತಿ ದಿನ ಇರೋದಿಲ್ಲ ಅನಿಸುತ್ತಿದೆ. ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಈ ಹೆಳಿಕೆಗೆ ಹಾಗೂ ಇತ್ತಿಚ್ಚಿಗೆ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಏನೋ ಸಂಭಂದ ಇರಬಹುದು ಎನ್ನಲಾಗುತ್ತಿದ್ದು ನಿಖಿಲ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ಹೀಗಾಗಿ ಮೊನ್ನೆ ಅಷ್ಟೇ ಕೇಂದ್ರ ಸಚಿವ ವ್ಹಿ ಸೋಮಣ್ಣ ಅವರು ಎಚ್ ಡಿಕೆ ಅವರು ಮನಸ್ಸು ಮಾಡಿದರೆ ಸರ್ಕಾರ ಪತನವಾಗುತ್ತದೆ ಎಂದು ಹೇಳಿರುವ ಹೇಳಿಕೆಗೂ ಇಂದು ನಿಖಿಲ್ ಹೇಳಿಕೆಗೂ ಸಂಭಂದ ಇರಬಹುದು ಎಂದು ಹೇಳಲಾಗುತ್ತಿದ್ದು ಮುಂದೆ ಯಾವ ಹಂತಕ್ಕೆ ತಲುಪುತ್ತದೆ ಕಾದು ನೀಡಬೇಕು