ಧಾರವಾಡ: ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಘಟನೆ ಧಾರವಾಡ ನಗರದ ಕೆಎಂಎಫ್ ಹತ್ತಿರ ಕಳೆದ ರಾತ್ರಿ ನಡೆದಿದ್ದು, ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. ಅತಿ ವೇಗವಾಗಿ ಬಂದಂತ ಕಾರು ಸಂಖ್ಯೆ ಕೆಎ 25 ಎಂಸಿ 0829 ಬಿಆರ್ ಟಿಎಸ್ ಬ್ಯಾರಿಗೆಡ್ ಗೆ ಹೊಡೆದು ಪಲ್ಟಿ ಆಗಿದೆ, ಪಲ್ಟಿ ಆದ ಪರಿಣಾಮ ಸಿದ್ದಾರ್ಥ್ ಅನ್ನೋ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.