ವಿಜಯಪುರ: ಕಾಲುವೆಯಲ್ಲಿನ ಮೋಟಾರ್ಗೆ ನೀರು ಹಾಕಲು ಹೋದಾಗ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಜಾಕವೆಲ್ ದೊಡ್ಡ ಕಾಲುವೆಯಲ್ಲಿ ಮಂಗಳವಾರ ನಡೆದಿದೆ.
ಶೇಖಪ್ಪ ಡೆಂಗಿ ಮೃತಪಟ್ಟಿರುವ ದುರ್ದೈವಿ. ಕಾಲುವೆಯಲ್ಲಿ ಕೆಲಸ ಮಾಡುವಾಗ ನೀರಿನ ಇಳಿಜಾರಿಗೆ ಕಾಲು ಜಾರಿ ಬಿದ್ದು ಶೇಖಪ್ಪ ಮೃತಪಟ್ಟಿದ್ದಾನೆ. ಅಲ್ಲದೇ, ಅಶೋಕ ಅಂಗಡಿಗೇರಿ ನಾಪತ್ತೆಯಾಗಿದ್ದು, ಆತನಿಗೆ ಹುಡುಕಾಟ ಆರಂಭವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರರು. ಕೂಡಗಿ ಎನ್ಟಿಪಿಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.