ವಿಜಯಪುರ: ಕರ್ನಾಟಕ ಸಾಲ ಒದಗಿಸುವವರು ಎಂದು ಆನ್ಲೈನ್ ಮೂಲಕ ಸಾವಿರಾರು ನಗದು ವಂಚನೆಗೈದಿರುವ ಆರೋಪಿಯನ್ನು ವಿಜಯಪುರ ಜಿಲ್ಲಾ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯ ಎಂಪಿ ಪ್ರಕಾಶನಗರ ನಿವಾಸಿ ರುದ್ರಮುನಿ ಬಸವರಾಜ್ ಬಂಡೆಕೊಂಚಿಗೇರಿ ಬಂಧಿತ ಆರೋಪಿ.
ಇನ್ನು ಆರೋಪಿ ರುದ್ರಮುನಿ ಆನ್ಲೈನ್ ಮೂಲಕ ಲೋನ್ ನೀಡುವ ಭರವಸೆ ನೀಡಿ ಮಹೇಶ ಬಿರಾದಾರಗೆ ಮೋಸಗೈದಿದ್ದನು. ಅದಕ್ಕಾಗಿ ಮಹೇಶ ಪೊಲೀಸರಿಗೆ ದೂರು ನೀಡಿದ ಬಳಿಕ ಸಿಪಿಐ ರಮೇಶ ಅವಜಿ ನೇತೃತ್ವದ ತಂಡ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಒಂದು ಮೊಬೈಲ್, ಎರಡು ಸೀಮ್ ಜಪ್ತಿಗೈದಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.