ವಿಜಯಪುರ: ಸಿಎಂ ಬಸವರಾಜ್ ಬೊಮ್ಮಾಯಿ ಹೆಬ್ಬೆಟ್ ಗಿರಾಕಿ. ಅವರಿಗೆ ಏನು ತಿಳುವಳಿಕೇನೇ ಇಲ್ಲ ಎಂದು ಕರ್ನಾಟಕ ಪೊಲೀಸ ಮಹಾಸಂಘದ ರಾಜ್ಯಾಧ್ಯಕ್ಷ ವಿ. ಶಶಿದರ್ ಆರೋಪಿಸಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಔರಾದಕರ್ ವರದಿ ಜಾರಿಗಾಗಿ ಸಾಕಷ್ಟು ಒತ್ತಡ ಹಾಕ್ತಿದಿವಿ, ಪ್ರಯತ್ನ ಮಾಡ್ತಿದಿವಿ. ಅವರಿಗೇನು ತಿಳುವಳಿಕೆನೇ ಇಲ್ಲ. ಅಲ್ಲದೇ, ಐಎಎಸ್ & ಐಪಿಎಸ್ ಹೇಳಿದಂಗೆ ಇವರು ಕೇಳ್ತಾರೆ. ಕಾನೂನು ತಿಳುವಳಿಕೆನೇ ಇಲ್ಲಾ, ಹೆಬ್ಬೆಟ್ಟು ಗಿರಾಕಿಗಳು ಎಂದು ಕಿಡಿಕಾರಿದರು. ಇವರಿಗೆ ಕಾನೂನು ಏನು ಎತ್ತ ಎಂಬುದು ಗೊತ್ತಿಲ್ಲ. ಐಎಎಸ್ ನವರು ಫೈಲ್ ತಂದು ಇಡ್ತಾರೆ. ಸೆಕ್ಷನ್ ಆಫೀಸರ್ಸ್ ಫೈಲ್ ತರ್ತಾರೆ, ಇವರು ಸಹಿ ಮಾಡಿ ಕಳಿಸ್ತಾರೆ. ನಮ್ಮ ದುರಂತ ಜನಾಡಳಿತನ್ನು ಇಂತಹವರ ಕೈಗೆ ಕೊಟ್ಟು ನಲುಗಿ ಹೋಗ್ತಿದ್ದೇವೆ ಎಂದರು.
ನಮ್ಮ ಸಿಎಂ ಹೆಬ್ಬೆಟ್ಟು ಗಿರಾಕಿ
![ನಮ್ಮ ಸಿಎಂ ಹೆಬ್ಬೆಟ್ಟು ಗಿರಾಕಿ ನಮ್ಮ ಸಿಎಂ ಹೆಬ್ಬೆಟ್ಟು ಗಿರಾಕಿ](https://karnataka1news.com/wp-content/uploads/2023/03/IMG-20230314-WA0036-860x645.jpg)