ವಿಜಯಪುರ: ವಿಜಯಪುರ ದ್ರಾಕ್ಷಿ ಬ್ರ್ಯಾಂಡಿಂಗ್, ಪ್ರಚಾರ ಹಾಗೂ ಮಾರಾಟ ಉದ್ದೇಶದಿಂದ “ನಮ್ಮ ವಿಜಯಪುರ ದ್ರಾಕ್ಷಿ” ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್ ಶಿಂಧೆ ಹೇಳಿದರು.
ವಿಜಯಪುರ ನಗರದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,
ನಗರದ ತೋಟಗಾರಿಕೆ ಇಲಾಖೆಯ ಬಸವ ವನದಲ್ಲಿ ಫೆ.16 ರಿಂದ 20 ರವರೆಗೆ ಈ ಮೇಳ ಆಯೋಜಿಸಲಾಗುತ್ತಿದ್ದು, ವಿವಿಧ ತೆರನಾದ ದ್ರಾಕ್ಷಿಗಳನ್ನು ಪ್ರದರ್ಶನದ ಜೊತೆಗೆ ಮಾರಾಟ ನಡೆಯಲಿದೆ. ಜಿಲ್ಲೆಯಲ್ಲಿ ಸುಮಾರು 12 ವಿವಿಧ ತಳಿಗಳ ದ್ರಾಕ್ಷಿಗಳನ್ನು ಬೆಳೆಯಲಾಗುತ್ತಿದೆ. ಈ ಎಲ್ಲ ತಳಿಗಳನ್ನು ಪರಿಚಯಿಸುವುದು ಕೂಡ ಈ ಮೇಳದ ಉದ್ದೇಶವಾಗಿದೆ ಎಂದರು.
ಸುಮಾರು 10-12 ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಹಾಪ್ ಕಾಮ್ಸ್ ಗಳಲ್ಲೂ ಮಾರಾಟ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.