ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ನಮ್ಮ ಬೇಡಿಕೆಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳುವುದಾಗಿ ಸಮುದಾಯಕ್ಕೆ ಭರವಸೆ ನೀಡಿದ್ದರು. ಆದರೆ, ಬೆಳಗಾವಿ ಅಧಿವೇಶನ ನಡೆದು ಎರಡು ತಿಂಗಳಾಗಿತ್ತು. ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಈಗ ಮತ್ತೆ ಹೋರಾಟ ಮಾಡಲು ಮುಂದಾಗಿರುವ ಜಯ ಮೃತ್ಯುಂಜಯ ಸ್ವಾಮಿ ಅವರು ಪಂಚಮಸಾಲಿಗಳಿಗೆ 2A ಹಾಗೂ ಲಿಂಗಾಯತ ಎಲ್ಲಾ ಉಪಸಮಾಜಗಳಿಗೆ OBC ಮೀಸಲಾತಿಗಾಗಿ ಆರಂಭವಾಗಿರುವ 7 ನೇ ಹಂತದ ಹೋರಾಟ,ಮೀಸಲಾತಿ ಹಕ್ಕನ್ನು ಸರ್ಕಾರಕ್ಕೆ, ಪ್ರತಿಪಾದಿಸುವಂತೆ ಶಾಸಕರಿಗೆ ಹಕ್ಕೊತ್ತಾಯಿಸಲು ಮಾಡಲು ನಾಳೆ ಬುಧವಾರ ಜುಲೈ3 ರಂದು ದಾರವಾಡ ಶಾಸಕ ಹಾಗೂ ಸಮಾಜದ ಪ್ರಮುಖ ಮುಖಂಡರಾದ ವಿನಯ ಕುಲಕರ್ಣಿ ಅವರ ಮನೆಯಿಂದಲೇ ಹೋರಾಟ ಮಾಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಈ ಹೋರಾಟದಲ್ಲಿ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ , ಧರ್ಮ ಕ್ಷೇತ್ರ ಕೂಡಲಸಂಗಮಇವರ ದಿವ್ಯ ಸಾನಿಧ್ಯದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಧಾರವಾಡ ಜಿಲ್ಲಾ , ಎಲ್ಲಾ ತಾಲೂಕು , ಪಂಚಸೇನಾ , ಮಹಿಳಾ ಹಾಗೂ ಯುವ ಘಟಕಗಳ ಪಧಾಧಿಕಾರಿಗಳು ಭಾಗವಹಿಸಲಿದ್ದಾರೆ