ವಿಜಯಪುರ: ವಿದ್ಯುತ್ ವೈರ್ಗಳು ಡಬ್ಬಾ ಅಂಗಡಿಗಳ ಮೇಲೆ ಹರಿದು ಬಿದ್ದ ಪರಿಣಾಮ ಮೂರು ಡಬ್ಬಾ ಅಂಗಡಿಗಳು ಬೆಂಕಿಗಾಹುತಿ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ತೋಟಗಾರಿಕಾ ಇಲಾಖೆಯ ಕಛೇರಿ ಮುಂದೆ ಶುಕ್ರವಾರ ರಾತ್ರಿ ನಡೆದಿದೆ.
ಪತ್ರಿಮಠ ಚಹಾದ ಅಂಗಡಿ, ಮೊಬೈಲ್ ಶಾಪ್ ಹಾಗೂ ಪಾನ್ ಶಾಪ್ ಅಂಗಡಿಗಳಿಗೆ ಬೆಂಕಿ ತಗುಲಿದೆ. ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ, ಮುಖಂಡ ಹುಸೇನ ಮುಲ್ಲಾ, ಸುನೀಲ್ ಇಲ್ಲೂರ, ರಾಚೋಟಿ ಬಳಗಾರ ಅಂಗಡಿಗಳಿಗೆ ಬೆಂಕಿ ಅವಘಡದಿಂದ ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಭೇಟಿ ನೀಡಿ ಬೆಂಕಿ ನಂದಿಸಿದರು. ಘಟನೆಯಲ್ಲಿ ಸಾವಿರಾರು ಮೌಲ್ಯದ ವಸ್ತುಗಳು ಭಸ್ಮವಾಗಿವೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.