ವಿಜಯಪುರ: ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಜೈಲನಿಂದ ಎಸ್ಕೇಪ್ ಆಗಿರುವ ಘಟನೆ ವಿಜಯಪುರ ನಗರದ ದರ್ಗಾ ಜೈಲ್ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ರವಿ ಭೀಮಪ್ಪ ದಾಸರ್ ಎಸ್ಕೇಪ್ ಆಗಿರುವ ಕೈದಿ. ಇನ್ನು ದರ್ಗಾ ಜೈಲನಲ್ಲಿರುವ ಕೃಷಿ ತೋಟದಲ್ಲಿ ಕೆಲಸ ನಿರ್ವಹಿಸಿ ಸ್ನಾನಕ್ಕೆ ಹೋಗಿದ್ದ ರವಿ ಪರಾರಿಯಾಗಿದ್ದಾನೆ. ಅದಕ್ಕಾಗಿ ಸುತ್ತಮುತ್ತಲಿನ ಕಡೆಗೂ ವಿಚಾರಿಸಿದ್ರೂ ಮಾಹಿತಿ ಲಭ್ಯವಾಗಿಲ್ಲ. ಕೈದಿ ಪತ್ತೆ ಮಾಡುವಂತೆ ಜೈಲಿನ ಹೆಡ್ ವಾರ್ಡನ್ ಎಸ್ ಸಿ ಪುಕಾಳೆ ದೂರು ನೀಡಿದ್ದಾರೆ. ಈ ಕುರಿತು ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.