ವಿಜಯಪುರ: ಮುದ್ದೇಬಿಹಾಳದಲ್ಲಿ ಅಮಾನವೀಯ ಘಟನೆಯ ವಿಸ್ತೃತ ವರದಿ ಆಧರಿಸಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಭೋಸಲೆ ಪೆಟ್ರೋಲ್ ಡೀಸೆಲ್ ಬಂಕ್ ಗೆ ಮುದ್ದೇಬಿಹಾಳ ತಹಶೀಲ್ದಾರ್ ಹಾಗೂ ಪಿಎಸ್ಐ ಭೇಟಿ ನೀಡಿ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ತಹಶೀಲ್ದಾರ ಟಿ. ರೇಖಾ ಹಾಗೂ ಮುದ್ದೇಬಿಹಾಳ ಪೊಲೀಸ್ ಠಾಣೆಯ ಪಿಎಸೈ ಆರೀಫ್ ಮುಶಾಪುರೆ ಭೇಟಿ ನೀಡಿ, ಬಂಕ್ನಲ್ಲಿರುವ ಕೆಲಸಗಾರರಿಗೆ ಖಡಕ್ ಎಚ್ಚರಿಕೆ ನೀಡಿ, ಮೌನೇಶನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ ಮೌನೇಶ ಪತ್ತಾರನ್ನು ಅರೆಬೆತ್ತಲೆಗೊಳಿಸಿ ಬಂಕ್ನಲ್ಲಿಟ್ಟಿದ್ದರು. ಇಡೀ ಘಟನೆ ಕುರಿತು ದೂರು ನೀಡಲು ಪೊಲೀಸ್ ಠಾಣೆಗೆ ಮೌನೇಶ ಪತ್ನಿ ರಂಗಮ್ಮ ಹಾಗೂ ಮಕ್ಕಳು ತೆರಳಿದರು.
ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಅರೆಬೆತ್ತಲೆ ಪ್ರಕರಣ : ವ್ಯಕ್ತಿಯ ರಕ್ಷಣೆ
![](https://karnataka1news.com/wp-content/uploads/2023/06/IMG-20230626-WA0069-860x645.jpg)