ಉತ್ತರ ಕನ್ನಡ: ಗೋಡೌನನಲ್ಲಿ ಸಂಗ್ರಹಿಸಿಯಿಟ್ಟಿದ್ದ ಲಕ್ಷಾಂತರ ಮೌಲ್ಯದ ಅಡಿಕೆ ಕಳ್ಳತನಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹಳ್ಳೂರ ಓಣಿಯಲ್ಲಿ ನಡೆದಿದೆ.
ಫಕ್ಕಿರೇಶ ಮಲ್ಲಪ್ಪ ದೊಡಮನಿ (30) ಬಂಧಿತ ಆರೋಪಿ. ಇನ್ನೂ ನವೀನ ಹದ್ಲಿಮನಿ ತೋಟದಲ್ಲಿ ಅಡಿಕೆ ಸಂಗ್ರಹಿಸಿ ತಮ್ಮ ಗೋಡೌನಲ್ಲಿ ಇಟ್ಟಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡು ಆರೋಪಿ ಫಕ್ಕಿರೇಶ ಅಡಿಕೆ ಕಳ್ಳತನಗೈದು ಪರಾರಿಯಾಗಿದ್ದನು. ಪ್ರಕರಣದ ತನಿಖೆ ನಡೆಸಿದ ಪಿಎಸ್ಐ ಸಿದ್ದಪ್ಪ ಸಿಮಾನಿ ನೇತೃತ್ವದ ತಂಡ ಆರೋಪಿ ಬಂಧಿಸಿ, ಆತನ ಬಳಿಯಿದ್ದ 2.50 ಲಕ್ಷ ಮೌಲ್ಯದ 4 ಕ್ವಿಂಟಾಲ್ 60 ಕೆಜಿ ಅಡಿಕೆ, ಎರಡು ವಾಹನಗಳನ್ನು ಜಪ್ತಿಗೈದಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.