ವಿಜಯಪುರ: ಅಕ್ರಮವಾಗಿ ಜಮೀನಿನಲ್ಲಿ ಬೆಳೆದ ಗಾಂಜಾ ಗಿಡಗಳನ್ನು ಕಿತ್ತುಕೊಂಡು ಮನೆಯಟ್ಟಿರುವ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ತಾಲ್ಲೂಕಿನ ದ್ಯಾಬೇರಿ ಡಗೆ ವಸ್ತಿಯಲ್ಲಿ ನಡೆದಿದೆ.
ರಮೇಶ ರಾಜಾರಾಮ್ ತರಸೆ ಬಂಧಿತ ಆರೋಪಿ. ಇನ್ನು ಆರೋಪಿ ರಮೇಶ ಮಾವನ ಜಮೀನಿನಲ್ಲಿ ಬೆಳೆದ 13 ಹಸಿ ಗಿಡಗಳನ್ನು ಕಿತ್ತುಕೊಂಡಿದ್ದರು. ಇನ್ನು ಸುಮಾರು 16,500 ಮೌಲ್ಯದ 16 ಕೆಜಿ 500 ಗ್ರಾಂ ಹಸಿ ಗಾಂಜಾ ಜಪ್ತಿಗೈದಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.